Tuesday, July 2, 2019

#ಏಕಾಂತದ ಮಿತ್ರನೊಂದಿಗಿನ ಸಂಭಾಷಣೆ..!


ಹಾರಿ ಹೋಗಿ ಬಿಡಲೇ..???
ನನ್ನಿಂದ ನಾ ಕಳೆದುಹೋಗುವ ಮುನ್ನಾ
ಬಾನು ಸೇರಿ ಬಿಡಲೇ…???
ಗೂಡು ಪಂಜರವಾಗುವ ಮುನ್ನಾ

ಸಂಬಂಧಗಳಿಂದ ನಿರೀಕ್ಷೆ ನನಗೇಕೆ ?
ಬಂಧಗಳ ಬೆಸುಗೆಯ ಹಂಗೇಕೆ ?
ಗರಿಗೆದರ ಹೋದರೆ ಅರಿವಾಗುತ್ತಿದೆ
ಒಂದೊಂದು ಗರಿಗೂ ಒಂದೊಂದು ಸಂಬಂಧ …!!!

ಬಂಧಗಳ ಬಂಧನ ಕಳಚದೆ
ಹಾರುವ ಹಾಗಿಲ್ಲಾ
ಸಂಬಂಧಗಳ ಗರಿ ಕಳಚಿದಂತೆ
ಹಾರುವ ರೆಕ್ಕೆಗಳಿಗೆ ಬಲವಿಲ್ಲಾ

ಉಳಿದು ಬಿಡಲೇ ಹೀಗೆ
ಬಲ್ಲವರಿಗೆ ಪರಿಚಿತನಾಗಿ
ಅರಿತವರಿಗೆ ಚಿರಪರಿತನಾಗಿ
ನನ್ನೊಳಗಿನ ಅಪರಿಚಿತನನ್ನು ಮರೆತು ?

ಬಂಧನಗಳಿಂದಲೇ ಈ ಬಾಳು
ಬಾಳಿನಿಂದಲೇ ಈ ಬಂಧನಾ
ಅನ್ವೇಷಣೆಯ ಪ್ರಯತ್ನವೇ ವ್ಯರ್ಥ
ಬಹುಶಃ ಇದೇ ಜೀವನದ ಸತ್ಯ..!

No comments:

Post a Comment

ಇದು ಬೇರೆ ಏನು ಅಲ್ಲಾ Tax-Terrorism..💯

ದೇಶದ ತೆರಿಗೆ ವ್ಯವಸ್ಥೆ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ, ಆದರೆ ನಮ್ಮ ತೆರಿಗೆ ವ್ಯವಸ್ಥೆ ಮಾತ್ರ ಕಟು ಟೀಕೆಗೆ, ವಿಮರ್ಶೆಗೆ, ಪ್ರತಿಭಟನೆಗೆ ಯೋಗ್ಯ ಅನ್ನೋದು ಅಕ್ಷರಶ:...