Tuesday, May 21, 2019

#ಯಾಂತ್ರಿಕ ಜೀವನದ ಯಾತನೆಗಳು...!


ಕಂಬಿಗಳಿರದ ಜೈಲಿನಲ್ಲಿ ಕೂತಂತೆ ಸಾಲು ಸಾಲು ಕ್ಯೂಬಿಕಲ್ ಗಳ ನಡುವೆ  ಒಬ್ಬನೇ ಕೂತಿದ್ದೇನೆ ಅನ್ನೋ ಅನುಭವ. US ಪ್ರಾಜೆಕ್ಟ್ ಗೆ ಹಗಲು ರಾತ್ರಿ ದುಡಿದು ನನ್ನನ್ನೇ ಮರೆತಿದ್ದೇನೆ, ಇನ್ನೂ ರಾತ್ರಿ ಘಂಟೆ 11 ಆದರೂ ಮನೆ ಹೋಗುವುದನ್ನು ಮರೆತಿರೋದರಲ್ಲಿ ಅಚ್ಚರಿ ಇಲ್ಲ.

ಮ್ಯಾನೇಜರ್ ಗೆ ಹೆದರದವನು Silk Board Traffic'ಗೆ ಹೆದರಿ ಬೆಳಿಗ್ಗೆ 7 ಘಂಟೆಗೆ ಆಫೀಸ್ಸಿಗೆ ಓಡಿ ಬರುವುದು. ದಿನವಿಡೀ ಸಾಕಷ್ಟು ಕರೆಗಳು, ಮೀಟಿಂಗ್ಸ್ ಗಳು ರಕ್ತವನ್ನು ಹೀರಿವೆ. ಡೆಸ್ಕಿನ ಮುಂದೆ ‘ಪ್ಯಾಟ್ ಆನ್ ದಿ ಬ್ಯಾಕ್’ ಎಂಬ ಜುಜುಬಿ ಅವಾರ್ಡ್ ಹೆಣವಾಗಿ ಬಿದ್ದಿದೆ. ಕ್ಷಣಕ್ಷಣಕ್ಕೂ ಮೊಬೈಲ್ನಲ್ಲಿ ಒಂದಿಷ್ಟು ವಾಟ್ಸಪ್ಪ್ ಮೆಸೇಜ್ ಗಳು ಹರಿದಾಡುತ್ತಿವೆಯಾದರು  ಮೊಬೈಲಿನ ನೋಟಿಫಿಕೇಷನ್ಸ್ ಗಳ ಬೆಳಕು ಗಮನ ಕೆಡಿಸಲಿಲ್ಲ. ಕೊನೆಗೂ ಘಂಟೆ  12 ಕ್ಕೆ ಕೆಲಸ ಮುಗಿಯುತ್ತೆ. ಮನೆಗೆ ಕಾಲ್ ಮಾಡಿ ಆಫೀಸ್ನಿಂದ ಬಿಡುವುದಾಗಿ  ಉತ್ತರಬರುವುದರಲ್ಲಿ ಕಾಲ್ ಕಟ್ ಆಗಿರುತ್ತೆ.

UBER ಕ್ಯಾಬ್ ಬುಕ್ ಮಾಡಿದಾಗ ಕಾರು ಬರಲು ಇನ್ನೂ 10 ನಿಮಿಷ ತೋರಿಸುತ್ತಿರುತ್ತದೆ.

ಅಷ್ಟರಲ್ಲಿ ವಾಟ್ಸಾಪ್ ಓಪನ್ ಮಾಡಿ ನೋಡಿದಾಗ ಮುಖದಲ್ಲಿ ಹತಾಶೆಯ ಭಾವನೆ ಮೂಡಲು ಪ್ರಾರಂಭವಾಗುತ್ತದೆ….ವಾಟ್ಸಪ್ಪ್ ಗುಂಪೊಂದರಲ್ಲಿ ಸಾಲು ಸಾಲು congratulations ಎಂಬ ಉದ್ಘಾರಗಳು..! ತನ್ನ ೧೫ ವರ್ಷದ ಸ್ನೇಹಿತ ರೋಹಿತ್ ಎರಡು ತಿಂಗಳಿನಿಂದಷ್ಟೇ ತನ್ನ ಕ್ಯೂಬಿಕಲ್ ಕೆಲಸ ಬಿಟ್ಟು ಅವನು ಹುಟ್ಟುಹಾಕಿದ್ದ ಮ್ಯೂಸಿಕ್ ಬ್ಯಾಂಡ್ ಇಂದು ನಗರದ ಟಾಪ್ ೫ ಅಲ್ಲಿ ಗುರುತಿಸಿಕೊಂಡಿದೆ..! ಹೃದಯದಿಂದ ಬರದಿದ್ದರೂ hearty congratulations ಅಂತ ಟೈಪ್ ಮಾಡಿ ಸೆಂಡ್ ಮಾಡುವುದರೊಳಗೆ , ಕ್ಯಾಬ್ ಡ್ರೈವರ್ ಕರೆ ಮಾಡುತ್ತಾನೆ.
ಡ್ರೈವರ್ಗೆ ತನ್ನ ಆಫೀಸಿನ ಅಡ್ದ್ರೆಸ್ ಹೇಳಿ ಬೇಗ ಬರಲು ಹೇಳಿ.

ಒಂದು ಕ್ಷಣ ಸುತ್ತ ಮುತ್ತ ನೋಡಿದಾಗ ಆಫೀಸಿನಲ್ಲಿ ಯಾರು ಇಲ್ಲ. ಯಾರು ಇಲ್ಲದ ಆಫೀಸಿನ ಕ್ಯೂಬಿಕಲ್ ಗಳು ಸ್ಮಶಾನದಲ್ಲಿ ಮಲಗಿರುವ ಸಾಲು ಸಾಲು ಗೋರಿಗಳಂತೆ ಕಾಣುತ್ತಿವೆ.
ನನ್ನ ಮೊಬೈಲ್  screensaver  ಅಲ್ಲಿ  "stay hungry stay foolish " ಸಾಲುಗಳನ್ನು ಸ್ಟೀವ್ ಜಾಬ್ಸ್  ನನ್ನನ್ನೇ ನೋಡಿ ಹೇಳಿದಂತೆ  ಭಾಸವಾಗುತ್ತಿದೆ.!!

ಯಾವುದೊ ದೇಶದ ಯಾವುದೊ  ಕ್ಲೈಂಟ್ ಗೆ ಹಗಲು ರಾತ್ರಿ ನಾನೇಕೆ ದುಡಿಯುತ್ತಿದ್ದೇನೆ ?
ಬರವಣಿಗೆಯಲ್ಲಿ ಇಷ್ಟವಿದ್ದ ನನಗೆ ನನ್ನ ಬ್ಲಾಗ್ ನಲ್ಲಿ ಒಂದು ಪೋಸ್ಟ್ ಹಾಕಿ ಅದೆಷ್ಟೋ, ದಿನಗಳಾಯ್ತು!
ತೇಜಸ್ವಿ ಪುಸ್ತಕವೆಂದರೆ ರಾತ್ರಿವಿಡೀ ಓದುತಿದ್ದ ನಾನು, ಇಂದು ಮನೆಯಲ್ಲಿ ಪುಸ್ತಕಗಳ ವಾಸನೆಕೂಡ ಇಲ್ಲ ..ನನ್ನ ಬರವಣಿಗೆ ಮೆಚ್ಚಿ ಕಾಲೇಜಿನಲ್ಲಿ ಪ್ರಶಸ್ತಿ ಬಂದಾಗ ಮ್ಯೂಸಿಕ್ ನಲ್ಲಿ ಪ್ರಶಸ್ತಿ ಗಳಿಸಿದ್ದ ರೋಹಿತ್ ಕೂಡ ನನ್ನ ಬರವಣಿಗೆ ಬಗ್ಗೆ ಹೊಗಳಿದ್ದ.. !
ಸಿನಿಮಾ ವೆಂದರೆ ಕಾಲೇಜಿಗೆ ರಜೆ ಹಾಕಿ ಇಷ್ಟದ ಎಲ್ಲಾ ಸಿನೆಮಾವನ್ನು ನೋಡುತ್ತಿದ್ದಾಗ ನನ್ನಲ್ಲಿ ಒಬ್ಬ ಡೈರೆಕ್ಟರ್ ಸದ್ದಿಲ್ಲದೇ ಹುಟ್ಟುತ್ತಿದ್ದ!

ಹೌದು ! ನಾನು ನಾನಾಗಿ ಉಳಿದಿಲ್ಲ!!
ಒಂದು ಕವಿತೆ ಬರೆಯೋದ್ರಲ್ಲಿರೋ ಸುಖ ಒಂದು ಪ್ರೋಗ್ರಾಮ್ ಬರೆಯೋದರಲ್ಲಿ ಸಿಗುತ್ತಿಲ್ಲ.
ಗೆಳೆಯರ ಜೊತೆ ಸಿನಿಮಾ ನೋಡಿ ತೆರೆಹಿಂದಿನ ಕೆಲಸದ ಬಗ್ಗೆ ಮಾತನಾಡುವದ್ರಲ್ಲಿರೋ ಸುಖ ಘಂಟೆಗಟ್ಟಲೆ ನಡೆಯುವ ಕ್ಲೈಂಟ್ ಮೀಟಿಂಗ್ನಲ್ಲಿ ಸಿಗುತ್ತಿಲ್ಲ ಅಷ್ಟೊರಳಗೆ ಡ್ರೈವರ್ ಕಾಲ್ ಮಾಡಿ ತಾನು ಬಂದಿರೋದಾಗಿ ಹೇಳುತ್ತಾನೆ.

ನನ್ನ ಲ್ಯಾಪ್ಟಾಪ್ ನ ಡೆಸ್ಕ್ಟಾಪ್ ಮೇಲೆ ಯಾವಾಗಲೂ ಇರುವ ‘Passion’ ಎಂಬ ಫೋಲ್ಡರ್ ಅನ್ನು ಬಲು ತೀಕ್ಷ್ಣವಾಗಿ ನೋಡುತ್ತಿದ್ದಾಗ ಬರೆದ ಎಲ್ಲ ಅಂಕಣಗಳು, ಕವಿತೆಗಳು, ಕಥೆಗಳು ಅಲ್ಲದೆ ಶುರುಮಾಡಬೇಕೆಂದು ಕೊಳ್ಳುತ್ತಿದ್ದ ಅದೆಷ್ಟೋ IDEA's ನ ರೂಪರೇಷೆಗಳು ಆ Folder ತುಂಬಿಕೊಂಡಿವೆ..

ಎಡಗೈನಿಂದ ಮತ್ತೆ ಡ್ರೈವರ್ಗೆ ಕಾಲ್ ಮಾಡಿ ಬುಕಿಂಗ್ ಕ್ಯಾನ್ಸಲ್ ಮಾಡುವುದಾಗಿ ಹೇಳಿ ಬುಕ್ಕಿಂಗ್ ಕ್ಯಾನ್ಸಲ್ ಮಾಡಿದೆ .
ಬಲಗೈನಲ್ಲಿದ್ದ ಮೌಸಿನ ಕರ್ಸರ ಅನ್ನು ‘Passion’ ಫೋಲ್ಡರ್ ಮೇಲೆ ಕ್ಲಿಕ್ ಮಾಡಿ ಓಪನ್ ಮಾಡಿ ಏನೋ ಮಾಡಬೇಕುನ್ನುವ ಹಂಬಲದಲ್ಲಿ ಮತ್ತದೇ ಯಾಂತ್ರಿಕ ಜೀವನದ ಜಂಜಾಟದಲ್ಲಿ ಮುಳುಗಿ ಹೋಗಿರುವುದೇ ಗೊತ್ತಾಗಲಿಲ್ಲ ….!!!!

Tuesday, May 14, 2019

#ಸೂಜಿದಾರ


ಬೆಂಗಳೂರಿನ ಬಿಡುವಿಲ್ಲದ ಕೆಲಸದ ನಡುವೆಯು ನೋಡಿದ ಚಿತ್ರ
ಬರಿ ಚಿತ್ರದ ಹೆಸರು ಮತ್ತು Trailer ನೋಡಿ ಚಿತ್ರ ನೋಡುವ ಕಾತುರದಿಂದ ಹೋದವನು
ಚಿತ್ರದ ಆರಂಭದಲ್ಲಿಯೆ ಬರಿಯ ಹೊಸ ಹೊಸ ಮುಖಗಳನ್ನು ಕಂಡಾಗ ನಿಜವಾಗಿಯೂ ಏನೋ ಹೊಸ ಪ್ರಯೋಗವಿದೆ ಎಂದು ಎನಿಸುವ ಚಿತ್ರ,
ಹಾಗೇ ಚಿತ್ರವನ್ನು ನೋಡುತ್ತ ನೋಡುತ್ತ ಪ್ರತಿ ಪಾತ್ರವು ಸಹ ಅದ್ಬುತ ಎನಿಸಿಬಿಡುತ್ತದೆ,
ಚಿತ್ರದುರ್ಗದ ಗ್ರಾಮ್ಯದ ಸೊಗಡಿನ ಹೂ ಮಾರುವ ಹುಡುಗಿಗೆ ಬಣ್ಣದ ಜಗತ್ತಿನಲಿ ಬೆಳಗುವ ಆಸೆ,
ಮಂಗಳೂರಿನ ಮುಸ್ಲಿಂ ಯುವಕನೊಬ್ಬನ ಸುತ್ತ ಹುಟ್ಟಿ ಹರಡುವ ಕಥೆ,
ಅಶೋಕವನದ ಸೀತೆಯನ್ನೆ ರೆಪ್ಲಿಕಾ ಮಾಡಿ ತೋರಿಸಿರುವ ಪದ್ಮ ( ಹರಿಪ್ರಿಯಾ) ಪಾತ್ರಧಾರಿಯು ಪ್ರತಿ ಬಾರಿ ತೆರೆಯ ಮೇಲೆ ಕಂಡಾಗಲು ಸಹ ಒಂದೊಂದು ದಿಕ್ಕಿನೆಡೆಗೆ ತೆರೆದುಕೊಳ್ಳುವ ಕಥೆ,
ಸುಚಿಂದ್ರ ಪ್ರಸಾದ್ ಮೊದಲ ಬಾರಿಗೆ ಇಂತಹ ಒಂದು ಪಾತ್ರದಲ್ಲಿ ಅಭಿನಯ,
ಅಚ್ಯುತ್ ರಾವ್ ಎಂದಿನಂತೆ ಪಾತ್ರದೊಳಗೆ ಪರಕಾಯ ಪ್ರವೇಶ,
ಹರಿಪ್ರಿಯ ನಟನೆಯನ್ನು ನೋಡಿದರೆ, ಅವರು ಆಯ್ಕೆ ಮಾಡಿಕೊಂಡಿರುವ ಕಥಾವಸ್ತುವಿನ ಸೂಕ್ಷ್ಮತೆ ಅಬ್ಬ ಖಂಡಿತ ಈಕೆ ಕನ್ನಡದಲ್ಲಿ ಮಿನುಗುತಾರೆ ಕಲ್ಪಾನ ರವರನ್ನು ಮೀರಿಸುವ ಅಭಿನಯವನ್ನು ಈ ಚಿತ್ರದಲ್ಲಿ ನಿಡಿದ್ದಾರೆ,
ತುಂಬಾ ಸರಳವಾಗಿ ಮನಮುಟ್ಟುವುದು ನಾಯಕನಟನ ಪಾತ್ರ ಶಂಕರ/ ಶಬ್ಬೀರ್,
ಚೋಟು ಪಾತ್ರದಾರಿಯ ಆಯ್ಕೆ ನಿಜವಾಗಿಯೂ ಶ್ಲಾಘನೀಯ
ಚಿತ್ರದುರ್ಗದ ಹೆಸರಿನಲ್ಲೆ ಅದೊಂದು ತಾಕತ್ ಇದೆ
ಅದನ್ನು ವಿಭಿನ್ನವಾಗಿ ತೋರಿಸಿದಲ್ಲದೆ,
ಎಲ್ಲಿಯು ಸಹ ಸಭ್ಯತೆಯ ಎಲ್ಲೆಮೀರದೆ ದೃಶ್ಯಗಳನ್ನು ಚಿತ್ರೀಕರಿಸಿದ ರೀತಿ ಒಮ್ಮೆಗೆ ಪುಟ್ಟಣ್ಣ ಕಣಗಾಲ್ ರವರ ನೆನಪಾಗಿ ಬಿಡುತ್ತದೆ ಒಮ್ಮೆ ಚಿತ್ರ ನೋಡಿ ಇದರ ತೀವ್ರತೆ ಅರ್ಥ ಆಗತ್ತೆ,
ಉಸಿರು ಬಿಗಿ ಹಿಡಿಸುವ ಮಧ್ಯಂತರ,
ಎದೆಯ ಬಡಿತ ಜೋರು ಮಾಡುವ ಕ್ಲೈಮ್ಯಾಕ್ಸ್ ನ ಸೂಜಿದಾರ-2 ಎಂಬ ಎರಡನೇ ಅಧ್ಯಾಯದ ಆರಂಭ ಮತ್ತು ನಿರೀಕ್ಷೆ,
ಪ್ರೇಕ್ಷಕರಿಗೆ ಏನನ್ನು ಹೇಳಲು ಹೊರಟಿದ್ದೀರೋ ಅದನ್ನು ಹೇಳಿ ಗೆದ್ದಿದ್ದಾರೆ ನಿರ್ದೇಶಕರು..
ಚಿತ್ರದ ಜೀವಾಳವೆ ಕಥೆ ಮತ್ತು ಪಾತ್ರಗಳ ಆಯ್ಕೆ,
ಪ್ರತಿ ಪಾತ್ರಗಳಿಗೂ ಕೊಡುವ ಪ್ರಾಧಾನ್ಯತೆ ಮತ್ತು ಸಂಭಾಷಣೆ ಎಲ್ಲವೂ ಸರಳ,
ಕ್ಯಾಮೇರಾ ಕೈಚಳಕವೇ ಚಿತ್ರದ ನೈಜತೆಗೆ ಕನ್ನಡಿ,
ಮುಖ್ಯವಾಗಿ ಸ್ತ್ರೀ ಸಂವೇದನೆಯನ್ನ,
ಗಂಡಿನ ಮನಸಿನ ತಳಮಳವನ್ನ,
ಬದುಕು ಮತ್ತು ಧರ್ಮದ ನಡುವಿನ ಅಂತವನ್ನ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕರಾದ ಮೌನೇಶ್ ಬಡಿಗೇರ್,
ಯಾರೆಲ್ಲ ನೋಡಿಲ್ಲ ಖಂಡಿತ ಒಮ್ಮೆ ನೋಡಿ,
ಹೆಸರಿಗೆ ತಕ್ಕಂತೆ ಇಲ್ಲಿ ಕಥೆ ಮತ್ತು ಪಾತ್ರದಾರಿಗಳೇ

#ಸೂಜಿಮತ್ತುದಾರ

Friday, May 10, 2019

#ಮೆಜೆಸ್ಟಿಕ್‌ನಲ್ಲೊಂದು ದಿನ..!

ಬೆಂಗಳೂರಿನ ಹೃದಯ ಭಾಗ ಎಂದರೆ ಅದು ಮೆಜೆಸ್ಟಿಕ್.  ಮೆಜೆಸ್ಟಿಕ್ಕಿನಲ್ಲಿ ಕತ್ತಲಾಗುವುದಿಲ್ಲ
ಆದರೂ ಬೆಳಗಾಗುತ್ತದೆ
ಯಾವ್ಯಾವುದೋ ಊರಿನಿಂದ ಹರಿದು ಬರುವ ಬಸ್ಸುಗಳು
ರಾಜಾಜಿ ನಗರಕ್ಕೂ ಸುಭಾಷ್ ನಗರಕ್ಕೂ ಒಂದು ಸೇತುವೆ ಕಟ್ಟುತ್ತವೆ.

ಅಮರ್ ಹೋಟೆಲ್ಲಿನ ಎದುರಿನ ಟೀ ಗಾಡಿಯಲ್ಲಿ
ನಿನ್ನೆ ಕುಡಿದ ಕಳಪೆ ಸರಕಿನ ಕಹಿಯಿನ್ನೂ ಹೋಗದ ಬಾಯಿಯಲ್ಲೇ
ಅವಳು ಚಹಾ ಒಂದನ್ನು ಕುಡಿಯುತ್ತಾಳೆ
ಮತ್ತೆ ಅಲ್ಲೆಲ್ಲೋ ನಗರದಹೊರ ವಲಯದ  ತನ್ನ ಮನೆಗೆ ಹೋಗುವ ಬಸ್ಸು ಹಿಡಿಯಲು ನಡೆಯುತ್ತಾಳೆ.

ಕೆಂಪು ಬಸ್ಸೊಂದರಿಂದ ಗಾಬರಿ ಕಣ್ಣಿನ ಹುಡುಗ - ಹುಡುಗಿ
ಭಯದಲ್ಲೇ ಬಸ್ಸಿಳಿಯುತ್ತಾರೆ
ತನ್ನೂರಿನ ನಂಬಿಕೆಯ ಗೆಳೆಯನ ರೂಮಿನ ವಿಳಾಸದ ಚೀಟಿ ಹಿಡಿದು
ಹೆದರಿಕೆಯಿಂದಲೇ ಬಸ್ಸು ಹುಡುಕುತ್ತಾರೆ.

ಅಲ್ಲಲ್ಲಿ ಮೇಲ್ಸೇತುವೆಯ ಮೇಲೆ ಮಲಗಿದ ಯಾವ್ಯಾವುದೋ ಊರಿನವರನ್ನು
ಬೆಳಗಿನ ಪಾಳಿಯ ವಾಚ್‌ಮನ್ ಕೋಲಿನಲ್ಲೇ ತಿವಿದು ಎಬ್ಬಿಸುತ್ತಾನೆ
ಎಲ್ಲಿಗೆ ಹೋಗಬೇಕೆಂದು ತಿಳಿಯದ ಅವರು ಕಣ್ಣು ಕಣ್ಣು ಬಿಡುತ್ತಾರೆ

ಘಂಟೆ ಆರಾಗುತ್ತಿದ್ದಂತೆ ಮೆಜೆಸ್ಟಿಕ್ ಮೈ ಮುರಿದು ಏಳುತ್ತದೆ
ಹಗಲೆಲ್ಲ ಸುತ್ತಿ ಹೈರಾಣಾದ ಬಸ್ಸುಗಳ ಬಿಸಿ ವಾಸನೆಯ ಜಾಗದಲ್ಲೀಗ
ಅವರಿವರ ಡಿಯೋ - ಪರ್ಫ್ಯೂಮುಗಳ ವಾಸನೆ ಮೆಲ್ಲಗೆ ಹರಡುತ್ತದೆ
ಕಡಲು ಸೇರುವ ನದಿಯಂತೆ
ಬೆಂಗಳೂರಿನ ಎಲ್ಲ ಮೂಲೆಗಳ ಬಸ್ಸುಗಳು ಮೆಜೆಸ್ಟಿಕ್ಕಿನ ತೆಕ್ಕೆಗೆ ಸೇರುತ್ತವೆ

ಮತ್ತೊಂದು ಹಗಲು ರೆಕ್ಕೆ ಬಿಚ್ಚುತ್ತದೆ
ಹೇಳಲು ಹೊರಟರೆ ಮೆಜೆಸ್ಟಿಕ್ಕಿನ ಹಗಲಿನದೇ ಒಂದು ಕತೆ
ಮತ್ತೆ ಸಿಕ್ಕಾಗ ಮಾತಾಡೋಣ...!

Thursday, May 2, 2019

#ಕಾಲಾಯ ತಸ್ಮೈ ನಮಃ..!


ಸಚಿನ್ ತೆಂಡೂಲ್ಕರ್ ಅವನೇನು ದೊಡ್ಡ ಗ್ರೇಟಾ.? ಅವನು ಆಡಿದಾಗ ಇಂಡಿಯಾ ಸೋತಿದ್ದೇ ಜಾಸ್ತಿ...
ರಜಿನಿಕಾಂತ್ ಏನ್ ದೊಡ್ಡ ಸಾಧನೆನಾ..? ಕೋತಿ ಮೊಗದವನನ್ನ ತಮಿಳರು ಮಾತ್ರ ನೋಡಬೇಕು...
ಅಮಿತಾಬ್ ಬಚ್ಚನ್ ಸಾಧನೆ ಏನಿದೆ..? ಆಕ್ಟರ್ ಆಗೋದು ದೊಡ್ಡ ಸಾಧನೆನೇ ಅಲ್ಲ....
.
.
ಬಹುಶ: ಅದು ಹದಿನೈದು ಹದಿನಾರರ ವಯಸ್ಸಿನ ಕಾಲ ನನಗೆ.ಹೀಗಿರುತ್ತಿತ್ತು ನನ್ನ ಮಾತಿನ ಧಾಟಿ.ವಿನಾಕಾರಣ ಸಾಧಕರನ್ನು ದೂಷಿಸುವ ,ತೆಗಳುವ,ಅವರ ಸಾಧನೆಯಲ್ಲೊಂದು ಐಬು ಹುಡುಕುವ ಹುಕಿ.ಅವರೆಡೆಗೆ ಅಸೂಯೆ ಅಂತಲ್ಲ,ಆದರೆ ಸಾಧನೆಯೇನು ದೊಡ್ಡ ವಿಷಯವೆ ಅಲ್ಲ ನನಗೆ ಎನ್ನುವ ಅರ್ಥಹೀನ ಅಹಮಿಕೆ. ಆದರೆ ಬದುಕಿಗಿಂತ ಬೇರೆ ಗುರುವಿಲ್ಲ ನೋಡಿ.ಬದುಕು ಬದಲಾಯಿತು.ಪದವಿ ಉದ್ಯೋಗ ಎಂದು ಅಲೆದು ಒಂದು ಹಂತಕ್ಕೆ ಬಂದು ನಿಂತಿತು. ದೈನಂದಿನ ಹರಸಾಹಸಗಳು ಅರ್ಥವಾಗಲಾರಂಭಿಸಿದವು.ಜೀವನದ ಮಜಲುಗಳು ಹೆಚ್ಚು ಹೆಚ್ಚು ಸ್ಪಷ್ಟವಾಗತೊಡಗಿದಂತೆ,ಸಾಧಕರೆಡೆಗಿನ ನನ್ನ ತಿರಸ್ಕಾರದ ಅರ್ಥಹೀನತೆಯೂ ಸ್ಪಷ್ಟವಾಗಲಾರಂಭಿಸಿತ್ತು.ಬದುಕಿನ ಎಲ್ಲ ಕಷ್ಟ ಕಾರ್ಪಣ್ಯಗಳನ್ನು ಮೀರಿ ನಿಂತು ಗೆಲುವಿನ ಶಿಖರವೇರಿನಿಲ್ಲುವುದರ ಹಿಂದಿರಬಹುದಾದ ಅಗಾಧ ಪರಿಶ್ರಮದ ಕತೆಯನ್ನು ಬದುಕೇ ಅರ್ಥ ಮಾಡಿಸಿತು. ಎಲ್ಲ ಜಂಜಡಗಳನ್ನು ಮೆಟ್ಟಿನಿಂತು  ಸಾಧಕರೆನ್ನಿಸಿಕೊಂಡವರ ಸಾಧನೆಯೆಡೆಗೆ ಬೆರಗುಗಣ್ಣಿನಿಂದ ನೋಡುವಂತೆ ಮಾಡಿತು.ನನ್ನದೇ ಬದುಕಿನ ಒತ್ತಡಗಳ ಮೂಲಕ  ಸಾಧಕರ ಬದುಕಿನ ಜಟಿಲತೆಯ ಪಾಠವನ್ನು ಬದುಕು ಹೇಳಿಕೊಟ್ಟಿತು.ಈಗ ಸಾಧಕರೆಡೆಗೆ  ಗೌರವವನ್ನು ಸೂಚಿಸಬೇಕೆಂದೆನೂ ಇಲ್ಲ.ತಾನಾಗಿಯೇ ಒಂದು ಗೌರವ ಮನಸಿನಲ್ಲಿ ಹುಟ್ಟಿಕೊಂಡುಬಿಡುವುದು ಅಭ್ಯಾಸವಾಗಿ ಹೋಗಿದೆ.

ಹೀಗೆ ಆಲೋಚಿಸುವ ಹೊತ್ತಿಗೆ ಅಲ್ಯಾರೋ,',ಏನು ಸರ್ ಕೊಹ್ಲಿ ದೊಡ್ಡ ಹೀರೋ ನಾ.ಈಗ ಬೌಲರುಗಳಲ್ಲಿ ಕ್ವಾಲಿಟಿ ಇಲ್ಲ ,ಅದಕ್ಕೆ ಸೆಂಚುರಿ ಮೇಲೆ ಸೆಂಚುರಿ ಹೊಡಿತಾರೆ 'ಎಂದರು.'ಮೋದಿ ದು ಏನು ದೊಡ್ಡ ಸಾಧನೆ... ?ಸರಿಯಾದ ವಿರೋದ ಪಕ್ಷ ಇಲ್ಲ ಅದಕ್ಕೆ ಗೆಲ್ತಾನೆ.' ಎಂದವರು ಇನ್ಯಾರೋ.ನನ್ನದೇ ವಯಸ್ಸಿನವರಿರಬೇಕು,ತಿಳುವಳಿಕೆ ಹೇಳುವುದು ಕಷ್ಟವೆನ್ನಿಸಿತು.ನಕ್ಕು ಸುಮ್ಮನಾದೆ

ಇದು ಬೇರೆ ಏನು ಅಲ್ಲಾ Tax-Terrorism..💯

ದೇಶದ ತೆರಿಗೆ ವ್ಯವಸ್ಥೆ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ, ಆದರೆ ನಮ್ಮ ತೆರಿಗೆ ವ್ಯವಸ್ಥೆ ಮಾತ್ರ ಕಟು ಟೀಕೆಗೆ, ವಿಮರ್ಶೆಗೆ, ಪ್ರತಿಭಟನೆಗೆ ಯೋಗ್ಯ ಅನ್ನೋದು ಅಕ್ಷರಶ:...