Tuesday, August 11, 2020

#ಬೆಂಗಳೂರು..its just not a city...its an Emotion..!


 ಬೆಳಿಗ್ಗೆ ಬೇಗ ಬೆಂಗಳೂರು ತಲುಪಿ ಸ್ನಾನ ಮಾಡಿ ಫ್ರೆಶ್ ಆಗಿ ಆಫೀಸಿಗೆ ಹೋಗಬೇಕು..!! ನಸುಕಿನ ನಿದ್ದೆಗಣ್ಣಲಿ ಕ್ಲೀನರ್ "ಇಲ್ಲಿ

ಯಾರಾದ್ರೂ ಇಳೀತೀರಾ?" ಅಂದಾಗ ಗಾಬರಿಯಾಗಿ ಎದ್ದು ಕಣ್ಣುಜ್ಜಿಕೊಂಡು ಕಿಟಕಿಯ ಪರದೆ ಸರಿಸೆ ಹೊರಗೆ ಇಣುಕಿ ಸಮಾಧಾನ

ಪಟ್ಟುಕೊಳ್ಳುವುದು..!! ಟೈಮ್ ನೋಡಲು ಫೋನ್ ಹೊರತಗೆದಾಗ "ರಾತ್ರಿ ಊಟ ಮಾಡಿದೆಯಾ !? ನಿದ್ದೆ ಆಯ್ತಾ !? ಬೆಂಗಳೂರು

ತಲುಪಿದೆಯಾ!?" ಅಂತ ವಿಚಾರಿಸಲು ಮನೆಯಿಂದ ಬಂದಿರುವು ೪-೫ ಮಿಸ್ ಕಾಲ್ ಗಳು..!! ತಣ್ಣನೆ ಗಾಳಿಗಂಜಿ ಮುಚ್ಚಿದ ಗಾಜಿನ

ಕಿಟಕಿಯ ಹೊರಗೆ ಕಾಣುವ ಹಾಲಿನ ವಾಹನ, ತರಕಾರಿ ವಾಹನಗಳು..!! ಮಧ್ಯೆ ಮಧ್ಯೆ ನೆಲಮಂಗಲ, ಎಂಟನೇ ಮೈಲಿ, ಪೀಣ್ಯ,

ಗುರಗುಂಟೇಪಾಳ್ಯ, ಯಶವಂತಪುರ, ಗೋವರ್ಧನ್ ಥಿಯೇಟರ್, ರಾಜಾಜಿನಗರ ಅಂತ ಬಸ್ ನಿಲ್ಲಿಸಿ ಲಗೇಜ್ ಇಳಿಸಿಕೊಂಡು

ತಮ್ಮ ತಮ್ಮ ಮನೆಗಳ ಕಡೆ ಹೆಜ್ಜೆ ಹಾಕೋ ಜನರು..!! ಬಸ್ ನಿಲ್ಧುತ್ತಿದ್ದಂತೆ ಡೋರ್ ಬಳಿ ಬಂದು ಗುಂಪುಗಟ್ಟಿ ಸರ್ ಆಟೋ ಬೇಕಾ ?

ಎಲ್ಲಿಗ್ ಹೋಗ್ಬೇಕು !? ಅಂತ ಕೇಳೋ ಆಟೋ ಡ್ರೈವರ್ ಗಳು..!! ಹೆಣಭಾರ ಲಗೇಜ್ ಹೊತ್ತುಕೊಂಡು ಆನಂದ್ ರಾವ್ ಸರ್ಕಲ್

ಇಂದ ಮೆಜೆಸ್ಟಿಕ್ ಬಸ್ ನಿಲ್ದಾಣದ ಫ್ಲೈ ಓವರ್ ಹತ್ತಿಳಿದು ಪ್ಲಾಟ್ಫಾರ್ಮ್ ತಲುಪಿ BMTC ಬಸ್, Metro ರೈಲಿಗಾಗಿ ಗಾಗಿ ಕಾಯೋ

ಜನರು..!! ಸೂರ್ಯ ದಿನವನ್ನು ಶುರುಮಾಡುತ್ತಿದ್ದಂತೆ ರಸ್ತೆ ಬದಿಯ ಟೀ ಅಂಗಡಿ, ಹೋಟೇಲ್ ಗಳು ಆಕ್ಟೀವ್ ಆಗುತ್ತಿರುವುದು..!!

ವ್ಯಾಪಾರ ಶುರು ಮಾಡಲು ಅಂಗಡಿಗಳ ಮುಂದೆ ಕಸ ಗುಡಿಸಿ ನೀರು ಹಾಕಿ ಹೊಸ ದಿನವನ್ನು ಶುರುಮಾಡಲು ಕಾಯುತ್ತಿರುವ ಮಾಲಿ

ಕರು...!! ಒಂದಾ ಎರಡಾ !? ದೂರದೂರಿನಿಂದ ಬೆಂಗಳೂರಿಗೆ ದುಡಿಯಲು ಬಂದವರ ಈ ಸುಂದರ ಅನುಭವಗಳು...ಇದು ಕೇವಲ

ಒಂದು ಮುಂಜಾವಿನಲಿ ನೋಡಬಹುದಾದ ಕೆಲವೇ ಕೆಲವು ಚಿತ್ರಣಗಳು. ವಿಶೇಷವಾಗಿ ಉತ್ತರ ಕರ್ನಾಟಕದ ಜನರಿಗೆ ಬೇಗ ಕನೆಕ್ಟ್

ಆಗೋ ವಿಷಯಗಳಿವು. "ಬೆಂಗಳೂರು" ಅನ್ನೋದು ಜೀವನದಲ್ಲಿ ತುಂಬಾ ಸಿಹಿಯಾದ ನೆನಪುಗಳನ್ನು, ಜೀವನಕ್ಕೆ ಬೇಕಾದ ಪಾಠಗಳ

ನ್ನು ಕಲಿಸಿದೆ....ಕಲಿಸುತ್ತಿದೆ!!

No comments:

Post a Comment

ಇದು ಬೇರೆ ಏನು ಅಲ್ಲಾ Tax-Terrorism..💯

ದೇಶದ ತೆರಿಗೆ ವ್ಯವಸ್ಥೆ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ, ಆದರೆ ನಮ್ಮ ತೆರಿಗೆ ವ್ಯವಸ್ಥೆ ಮಾತ್ರ ಕಟು ಟೀಕೆಗೆ, ವಿಮರ್ಶೆಗೆ, ಪ್ರತಿಭಟನೆಗೆ ಯೋಗ್ಯ ಅನ್ನೋದು ಅಕ್ಷರಶ:...