ಹೈಸ್ಕೂಲು ದಿನಗಳಲ್ಲಿ ಹಳ್ಳಿಗಳಲ್ಲಿ ಟಿವಿ ಇದ್ದಿದ್ದೇ ಕೆಲವೇ ಮನೆಗಳಲ್ಲಿ. ಒನ್ ಡೇ ಮ್ಯಾಚ್ ಗಳಿರಲಿ, ಟೆಸ್ಟ್ ಮ್ಯಾಚಸ್,ಅಥವಾ ವಲ್ಡ್ ಕಪ್ ಯಾವುದೇ ಇರಲಿ ಆಗಿನ ದಿನಗಳಲ್ಲಿ ಕ್ರಿಕೆಟ್ ನೋಡುತಿದ್ದೆ #Sachin ಮತ್ತು #Dravid ಗೊಸ್ಕರ್. ಆಮೇಲೆ ಕ್ರಿಕೆಟ್ ನೋಡೋದು ಬಿಟ್ಬಿಟ್ಟೆ. ಈಗ ಆಸಕ್ತಿಯೂ ಇಲ್ಲ. ತೀರ ಇತ್ತೀಚಿನ ಆಟಗಾರರೂ ಗೊತ್ತಿಲ್ಲ. ಆದರೆ ಈ ಮಹೇಂದ್ರ ಸಿಂಗ್ ಧೋನಿ ಇಷ್ಟ ಆಗ್ತಿದ್ದಿದ್ದು ಕ್ರಿಕೆಟ್ ಗಿಂತ ಆತನ ಬಿಹೇವಿಯರ್ ಗೆ. ಎಲ್ರೂ ಗೆದ್ದು ಸೆಲೆಬ್ರೇಟ್ ಮಾಡ್ತಿದ್ರೆ ಅವರಿಗೆಲ್ಲ ಕುಪ್ಪಳಿಸಲು ಬಿಟ್ಟು ಸಣ್ಣ ನಗು ನಗ್ತಾ ಆತ ನೋಡ್ತಿದ್ದ ರೀತಿಗೆ, ಮಾತಾಡಬೇಕಾದಾಗೆಲ್ಲ ಮಾತಾಡಲೇಬೇಕು ಅಂತಿಲ್ಲ, ಮೌನ ಒಂದಿಷ್ಟು ಮಾತಾಡಲಿ ಅಂತ ಸುಮ್ಮನಾಗುವ ಆ ಮೌನಕ್ಕೆ! ಆತನ ಫ್ಯಾನ್ ಏನೂ ಅಲ್ಲ. ಒಂಥರಾ ಇಷ್ಟ.
ಈ ಧೋನಿ ರಿಟೈರ್ ಆಗ್ತಿರೋದು ನನಗೇನೂ ಅನ್ನಿಸಲೇ ಇಲ್ಲ. ಆದರೆ ನಿನ್ನೆಯಿಂದ ಮನಸ್ಸಲ್ಲಿ ಕೂತಿದ್ದು ಆತ ರಿಟೈರ್ ಮೆಂಟ್ ಘೋಷಿಸಿದ ರೀತಿ! ಮೈ ಪಲ್ ದೋ ಪಲ್ ಕಾ ಶಾಯರ್ ಹೂಂ... ಪಲ್ ದೋ ಪಲ್ ಮೇರೀ ಕಹಾನೀ ಹೈ.. ಈ ಹಾಡೇ ಮಾತಾಡುತ್ತೆ. ಅಂತಹ ಅದ್ಭುತ ಹಾಡಿಗೆ ಫೋಟೋಸ್ ಕೊಲಾಜ್ ಮಾಡಿ ಹಾಕಿದ್ದು ಕೊನೆಯಾಗೋದು ನೆಲದ ಮೇಲೆ ಮಲಗಿದ ಧೋನಿ, ಬ್ಯಾಗ್ರೌಂಡಲ್ಲಿ ಚಪ್ಪಾಳೆಯ ಸದ್ದು. ಒಂದು ಸಿಂಪಲ್ ‘Thanks’ ಜೊತೆಗೆ consider me as retired from 19:29!
ಒಂದು ಪತ್ರಿಕಾ ಗೋಷ್ಟಿ ಇಲ್ಲ, ಒಂದು ಪಾರ್ಟಿ ಇಲ್ಲ, ಒಂದು ಪೇಪರ್ ಸ್ಟೇಟ್ ಮೆಂಟಿಲ್ಲ! ಸದ್ದು ಗದ್ದಲವಿಲ್ಲದೆ,
ಅಬ್ಬರದ ಮಾತಿಲ್ಲದೆ ಹೇಳಬೇಕಾದ್ದನ್ನೆಲ್ಲ ಹೇಳಿ ಮುಗಿಸಿದರು ಧೋನಿ! 
ಧೋನಿ ಇಷ್ಟ ಆಗ್ತಾನೆ ಅಂದಿದ್ದು
ಇದಕ್ಕೇ. ಹಾಗೆ ಬದುಕೋದು ಚೆಂದ ಆದರೆ ಕಷ್ಟ! ನಾನೂ ಪ್ರಯತ್ನಿಸುತ್ತಲೇ ಇರ್ತೀನಿ. ಆದರೆ ಹಾಳಾದ identity
crisis ಬಿಡಬೇಕಲ್ಲ
ನನಗಿಷ್ಟವಾದ ಆಟಗಾರನಿಗೆ ಆಡುವ ಅವಕಾಶ ನೀಡಲಿಲ್ಲ ಅಂತಲೇ ಧೋನಿಗೆ ಬೈದಾಡುವವರು
ಇರುವ ಹನ್ನೊಂದು ಜನರ ಟೀಮಿನಲ್ಲಿ ಯಾರ್ಯಾರನ್ನ ಆಡಿಸಬೇಕು ಮಾರ್ರೆ!?
ಯಾರ್ಯಾರಿಗೋ ವಿದಾಯದ ಪಂದ್ಯ ಕೊಡಿಸಲಿಲ್ಲ ಅಂತಲೂ ಅಳುವವರಿದ್ದಾರಲ್ಲ,
ಒಂದು ಕಡೆ ಸಚಿನ್/ಸೆಹ್ವಾಗ್/ಗಂಗೂಲಿ/ಲಕ್ಷ್ಮಣ್/ದ್ರಾವಿಡರಂತಹಾ Gods of Cricketರನ್ನೂ ಸಂಭಾಳಿಸಿಕೊಂಡು,
ಇನ್ನೊಂದು ಕಡೆ ಹೊಸಪ್ರತಿಭೆಗಳನ್ನೂ ಹುಡುಕಿ, ಹೆಕ್ಕಿ, ಬೆಳೆಸಿಕೊಂಡು, ದೇಶದ ಹೆಸರುಹೊತ್ತ ಜೆರ್ಸಿಯನ್ನೂ ಹೊತ್ತು,
ಪಂದ್ಯಗಳನ್ನು ಕಪ್ಪುಗಳನ್ನು ಗೆಲ್ಲುವುದು ಸುಲಭದ ಮಾತಲ್ಲ. ಅದರಲ್ಲೂ ಪಾಕಿಸ್ಥಾನ-ಭಾರತಗಳಂತಹಾ ಭಾವನಾತ್ಮಕ
ದೇಶಗಳಲ್ಲಂತೂ ಹತ್ತು ಪಟ್ಟು ಕಠಿಣ.
ಪ್ರತೀ ನಾಯಕನಿಗೂ ಅವನದ್ದೇ ಆದ ಹತ್ತಿರದ ಮತ್ತು ದೂರಗಾಮಿ ಗುರಿಯಿರುತ್ತದೆ. ಅದನ್ನು ತಲುಪುವ ಆ ಜರ್ನಿ
ಗೇಮ್ ಆಫ್ ಥ್ರೋನ್ಸ್’ನ ಖಲೀಸೀಯ ಪ್ರಯಾಣದಂತದ್ದು. ಕೆಲವು ಸುಲಭದ, ಕೆಲವು ಕಷ್ಟದ ನಿರ್ಧಾರಗಳು
ಎದುರಾಗೇ ಆಗುತ್ತವೆ. ಎಷ್ಟೋ ಬಾರಿ ತಮಗಿಷ್ಟವಾದದ್ದನ್ನೇ ಕಳೆದುಕೊಳ್ಳಬೇಕಾಗುತ್ತದೆ, ಕೆಲವೊಮ್ಮೆ ಉದ್ದೇಶಪೂರ್ವಕವಾಗಿ
ಬಿಟ್ಟೇ ನಡೆಯಬೇಕಾಗುತ್ತದೆ, ಇನ್ನು ಕೆಲವೊಮ್ಮೆ ಬಲಿಯೂ ಕೊಡಬೇಕಾಗಿಬರುತ್ತದೆ. It’s a part of the journey.
ಸದಾ ನೀರಿಗೆ ಅಂಟಿಕೊಂಡೇ ಇದ್ದರೂ ಯಾವತ್ತೂ ಅಂಟಿಕೊಳ್ಳದ ತಾವರೆಲೆಯಂತಹಾ ಸ್ಥಿತಪ್ರಜ್ಞತೆ, ಎಲ್ಲವನ್ನೂ
ಅಳೆದುತೂಗಿ ನಿರ್ಧರಿಸುವ ಯುಧಿಷ್ಟಿರನ ಸ್ಥಿರತೆ, ಪಾರ್ಥನಿಗೆ ಮಾತ್ರ ಹೆಚ್ಚು ಸಹಾಯಮಾಡಿ ನಮ್ಮನ್ನೆಲ್ಲಾ ಕಡೆಗಣಿಸಿದೆ
ಎಂದು ಬೈಸಿಕೊಂಡರೂ ನಕ್ಕು ಮತ್ತೆ ಅವರೊಂದಿಗೇ ಜೊತೆಗೇ ನಿಲ್ಲುವ ಕೃಷ್ಣನ ಆಳ......ಇವು ಎಲ್ಲರಿಗೂ ಕೂಡಿಬರಲ್ಲ.
ಹಾಗೆ ಕೂಡಿಬಂದವರನ್ನು ಜಗತ್ತು ಅರ್ಥೈಸಿಕೊಳ್ಳಲೂ ಸಾಧ್ಯವಿಲ್ಲ.
ಒಂದು ತಿಳಿದಿರಿ....ಅವನು ನಡೆದ ಹಾದಿ, ಅವನಿಗಿದ್ದ ಸವಾಲುಗಳು, ಅವನಿಗಿದ್ದ ಕಷ್ಟಗಳು ಅವನಿಗೆ ಮಾತ್ರ ಗೊತ್ತಿರಲು
ಸಾಧ್ಯ. ಅವಕ್ಕೆ ತಕ್ಕ ಪರಿಹಾರಗಳೂ ಅವನಿಗೆ ಮಾತ್ರ ಗೊತ್ತಿರಲು ಸಾಧ್ಯ. ನಾನು-ನೀವು ಬರೀ ಮಾತನಾಡಬಹುದಷ್ಟೇ.
ಬೇರೇನೂ ಮಾಡಲಾಗುವುದಿಲ್ಲ. ಮಾತನಾಡಲು ಯಾರಿಗೂ 144 ಸೆಕ್ಷನ್ನಿಲ್ಲ. ಎಷ್ಟು ಬೇಕಾದರೂ ಆಡಿ. ಆದರೆ ಅವು
ಬರೀ ಮಾತುಗಳಾಗಿರುತ್ತವೆಯೇ ಹೊರತು, ಅದರಿಂದ ನಯಾಪೈಸೆ ಪ್ರಯೋಜನ ನಿಮಗಾಗಲೀ, ನಿಮಾಮನೆಚ್ಚಿನ
ಆಟಗಾರರಿಗಾಗಲೀ, ಅವನಿಗಾಗಲೀ ಇರಲ್ಲ. ಯಾಕೆಂದರೆ ಅವು ಬರೀ ಹುಚ್ಚುಮನಸ್ಸಿನ ಹದಿನಾರು ಬಡಬಡಿಕೆಗಳಷ್ಟೇ.
You can sulk as much as you want.
There were many greats before you.
There will definitely be many greats after you.
But you will remain my true captain.
Keep inspiring many more.
Love you always MSD.
- ಮತ್ತೆ ಸಿಗುವಾ ನಾಳೆಗಳ್ಳಿದ್ದರೆ

No comments:
Post a Comment